Tuesday, July 29, 2008

ಮರು ಹುಟ್ಟು

ಮುರಿದು ಹೋಗಿತ್ತು ಅಷ್ಟೇ!?
ಬಿರುಗಾಳಿಯೂ ಬೀಸಿರಲಿಲ್ಲ
ಯಾರ ಕೊಡಲಿಯೇಟೂ ಬಿದ್ದಿರಲಿಲ್ಲ
ಆದರೂ ಮುರಿದು ಹೋಗಿತ್ತು!?




ಧ್ವನಿ
ಕೇಳುತ್ತಲೇ ಇತ್ತು.
ಕತ್ತಲೆಯಲ್ಲಿ
ಸು
ರಿ
ಯು
ತ್ತಿ
ರು

ಈ ಮಳೆ

ನಿ

ಹಾಗೆ.

ಚಿಗುರಿ
ನಿಂ
ತಿ
ದೆ
ಹತ್ತು ಹಲವು
ಕವಲುಗಳೊಡನೆ.

ಕಣ್ ಎವೆಯಿಕ್ಕದೆ
ಹಾಗೆ ಮೌನವಾಗಿ,
ಹೊಸ ಬೆಳಕಿಗೆ
ಮೊಗ್ಗೊಂದು
ಅರಳುವ ನಿರೀಕ್ಷೆಯಲಿ,
ಹರುಶದ ಒಸರ ಕನಸಿನಲಿ....



No comments: